ಇವುಗಳ ಪಾಲಿಸು

ಬದುಕು ಇದು ಸ್ಥಿರವಲ್ಲ ಓ ಮನುಜ
ನೀರ ಮೇಲಿನ ಗುಳ್ಳೆ ಇದು ಸಹಜ
ನೀರು ಹರಿಯುವಾಗ ಗುಳ್ಳೆ ಅರಳುವುದು
ನೀರು ಬತ್ತಿದರೆ ತಾನು ಸತ್ತು ಹೊಗುವುದು

ದೇಹ ಸುಖಕ್ಕೆ ಅವಕಾಶವಾದಿಯಾಗದಿರು
ಕಾಲದಲಿ ಕರಗುವ ಮುನ್ನ ಎಚ್ಚರವಾಗಿರು
ಸತ್ಯಗಳ ಒಳಹೊರಗು ನೀನು ಆಚರಿಸು
ತನ ಮನ ದನಿಯಲಿ ಅಹಿಂಸೆಯ ಪಾಲಿಸು

ಇನ್ನೊಬ್ಬರ ಹೆಣ್ಣು ಹೊನ್ನಿಗೆ ಕನ್ನ ಹಾಕದಿರು
ಅಬ್ಬರ ಆಡಂಬರದಿ ಸಿರಿ ಸಂಪದಿಸದಿರು
ದೇವರು ನೀಡಿದನ್ನು ಪಡೆದು ಶಾಂತಿಯಿಂದಿರು
ಬ್ರಹ್ಮಚರ್ಯವುತನು ಮನ ದನಿಯಲಿ ರಕ್ಷಿಸು

ದಿನವಿಡೀ ಪರಮಾತ್ಮನ ಸ್ವಾದ್ಯಾಯ ಮಾಡು
ರಾತ್ರಿಯಲಿ ದೇವರ ಧ್ಯಾನವ ಮಾಡು
ಬಾಳಿನಲ್ಲಿಯೇ ದೇವರ ದರ್ಶನ ಪಡೆ
ಮಾಣಿಕ್ಯ ವಿಠಲನಾಗಿ ಸಾವಿನೆಡೆಗೆ ನಡೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಳಿ ಕೂಗಿದರೇನೇ
Next post ಸಾರ್ಥಕ ಜೀವನ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys